Wednesday, December 30, 2009

ಗೆಳೆಯ
ನಿನ್ನ ಪ್ರೀತಿಯ ಬಿತ್ತಿ ಚಿತ್ರಗಳು
ಪ್ರತಿ ಕೇರಿಯಲ್ಲಿ ಬೆಳಗಲಿ
ಪ್ರತಿವಾರ ಬಿಡುಗಡೆಯಾಗಿ
ಮಾಯವಾಗುವ ಕನ್ನಡ ಚಲನಚಿತ್ರಗಳ
ಪೋಸ್ಟರ್್ಗಳ ಹಾಗೆ
ವಾರ್ಷಿಕ ವರದಿಯಲ್ಲಿ ಒಂದಾದರು ಯಶ ಕಾಣಲಿ.

Tuesday, August 25, 2009

ಸತ್ಯದೊಳಗಣ ಸತ್ಯ


ಸಂಪೂರ್ಣ ಸತ್ಯ
ಅಥಾವ ಸುಳ್ಳುಗಳಿಂದ
ಸಂಬಂಧಗಳು ಬೆಳೆಯುವದು
ಮತ್ತೇ ಉಳಿಯುವುದು
ಅಸಾದ್ಯ

ಒಂದೇ ಒಂದು ವಸ್ತುವಿನಿಂದ
ರುಚಿಕರವಾದ ಅಡುಗೆ
ಸಾಧ್ಯವಿಲ್ಲ ಎನ್ನುವಷ್ಟು
ಸರಳ
ಈ ಜೀವನ.

ಸಿಗದ ಚಂದಿರಾ...


ಅರ್ಧಕ್ಕೆ ಕನಸ ತುಂಡರಿಸುವ

ಭಾವನೆಗಳು

ಕನಸಲ್ಲೂ ಭಯ ಪಡುವ

ಮನಸು

ಮಲಗು ಮನಸೇ

ಭಯ ಭಾವನೆಗಳನ್ನು ಮರೆತು

ಗೋರಿಯೊಳಗೆ

ಸಿಗದ ಚಂದಿರ

ನಿನ್ನ ಜೊತೆಗಿರುವನು.


Friday, July 17, 2009

ದೇವತೆ

ಮಾರ ಮಾಂಸ ತಿನ್ನುವುದನ್ನು ಬಿಟ್ಟ
ಮನೆ ದೇವರು ಮಾರಿ
ಮನೆ ಬಿಟ್ಟು ಪರಾರಿ
ದಯವಿಟ್ಟು ಹುಡುಕಿಕಡೊಡಿ
ಅವನು ಅದೇ ಚಿಂತೆಯಲ್ಲಿ
ಕುಡಿಯುವದನ್ನು ಜಾಸ್ತಿ ಮಾಡಿಕೊಂಡಿದ್ದಾನೆ
ದೇವರಿಲ್ಲ ದಿಂಡಿರಿಲ್ಲ ಎಂದು
ರಸ್ತೆಯಲ್ಲಿ ಬಿದ್ದುಕೊಂಡು
ಬಡಬಡಿಸುತ್ತಿದ್ದಾನೆ
ದಯವಿಟ್ಟು ಹುಡುಕಿಕೊಡಿ

ಮಾಂಸ ತಿನ್ನುವುದ ಕಲಿತ ಶಾಸ್ತ್ರಿ
ಮನೆ ದೇವರು ಸರಸ್ವತಿ ಸಹಾ ಪರಾರಿ
ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ
ಬಡ ಬ್ರಾಹ್ಮಣ
ಮಂತ್ರ ಗೊತ್ತಿರದಿದ್ದರು
ಬಡಬಡಿಸುತ್ತಾನೆ
ಅರ್ಚಕನಾಗಿದ್ದಾನೆ
ದೇವರಿಲ್ಲವೆಂಬ ಸತ್ಯ ತಿಳಿದು

ಇಬ್ಬರ ಮನೆಯು ಬಣ ಬಣ
ದೇವರಿಲ್ಲ
ಅಡುಗೆ ಮನೆ ಟಣ ಟಣ
ದೇವತೆ...
ನೀ ಎಲ್ಲಿದ್ದರು ಬೇಗ ಮನೆಗೆ ಮರಳಿ ಬಾ
ಈ ಸುದ್ದಿ ನೋಡಿದ ಕೂಡಲೇ
ದಯವಿಟ್ಟು ಬಾ...

Sunday, June 28, 2009

ದೇವದಾಸಿ


ದೇವರು ಸತ್ತ ಸುದ್ದಿ

ಕೇಳಿ

ನನ್ನವ್ವ ದೇವದಾಸಿ

ದಿನ ತುಂಬುವುದಕ್ಕಿಂತ

ಮುಂಚೆ

ನನಗೆ ಜನ್ಮವಿತ್ತಳು


ಇಷ್ಟಪಡದೆ ಯಾರದೊ ಕಷ್ಟಕ್ಕೆ

ಹೊರ ಬಂದ ನಾನು

ಬಿಕ್ಕಿ ಬಿಕ್ಕಿ ಅತ್ತಿದ್ದೆ

ದಿನಕ್ಕೊಂದು ಅನಿಷ್ಟಗಳು

ನನಗಂಟತೊಡಗಿದ್ದವು

ಅನಿಷ್ಟಗಳಿಂದ ದೂರ ಮಾಡಲು

ನನ್ನಜ್ಜಿ

ದಿನಕ್ಕೆರಡರಂತೆ ಉಜ್ಜಿ ಉಜ್ಜಿ

ಮೈ ತೊಳೆದಳು


ಅವ್ವ ನೆಲಕಚ್ಚಿದಳು

ದಿನ ಕಳೆದಂತೆ

ಅರ್ಧ ಆಯುಷ್ಯದಲ್ಲಿ ಸತ್ತಿದ್ದ

ದೇವರು

ದೆವ್ವವಾಗಿಯಾದರು ಬಂದು

ಕಾಪಾಡುತ್ತಾನೆ

ಎಂಬ ಹಂಬಲ

ಅವಳ ಸಾವಿನ ಹಾಸಿಗೆಯ

ಮೂಲೆಯಲ್ಲಿ ಗಂಟು ಕಟ್ಟಿತ್ತು


ಅದರೊಳಗೊಂದೆರಡೂ

ರೂಪಾಯಿ

ನಾಣ್ಯಗಳು

ನಸಿ ಪುಡಿ ಅತ್ತಿದ್ದ

ಅಜ್ಜಿಗೆ ಸೇರಿದ್ದ

ಅಡಿಕೆ ಹೊಳುಗಳು

Friday, June 26, 2009

ಹೆಸರಿನ ಪ್ರೀತಿಯಲ್ಲಿ ನೆಟ್ಟೊಳಗೆ ಹುಡುಕಿದಾಗ ಸಿಕ್ಕದ್ದು


ಸಾಹಿತ್ಯ


ಸಾಹಿತ್ಯ

ಕವನ

ಕಾದಂಬರಿ

ಸಾಹಿತ್ಯ

ಪಲ್ಲವಿ

ಅನುಪಲ್ಲವಿ

ಸರಸ್ವತಿ (ವಿದ್ಯಾ ದೇವತೆ)

ಎಲ್ಲವೂ ನಮ್ಮ ಹುಡುಗಿಯರ ಹೆಸರುಗಳೇ

ಆದರೆ...

'ಸಾಹಿತ್ಯ' ಬರವಣಿಗೆಯಲ್ಲಿ ಅಲ್ಪ ಸಂಖ್ಯಾತರು.

Monday, June 22, 2009

ನಾಟಕ... ನಾಟಕ... ಬೀದಿ ನಾಟಕ...

ಗಂಧ ಗಾಳಿಯರಿಯದ ವಯಸ್ಸು
ಕೂಗಿದನೊಮ್ಮೆ ರಸ್ತೆಯಲ್ಲಿ ನಿಂತು
ನಾಟಕ... ನಾಟಕ... ಬೀದಿ ನಾಟಕ...

ಬೇಟಿಯಾದನು ಕೆಲವೆ ದಿನಗಳಲ್ಲಿ
ಅತಿ ಹಿರಿಯ ಬೀದಿಗಳನ್ನು ಮತ್ತು ಅಲ್ಲಿ ತನ್ನಂತೆಯೆ ಕೂಗಿ ಬೆಳೆದವರನ್ನು
ಹಿಗ್ಗಿದನು... ಕುಗ್ಗಿದನು...
ಹಿರಿಹಿರಿ ಹಿಗ್ಗಿ ಮುಂದೊಂದು ದಿನ ದೊಡ್ಡ ಬೀದಿಗಳ ಕನಸು ಕಂಡನು

ರಕ್ತದ ಬಣ್ಣ ಒಂದೇ ಬಡವನಿಗೂ ಶ್ರೀಮಂತನಿಗೂ...
ದಿಲ್ಲಿಯಲಿ ಸರ್ಕಾರದ ಜೋರು... ನಮ್ಮ ಹಳ್ಳಿಯಲಿ ಕೂಗಿಲ್ಲದ ಗೋಳು...
ಕೆಲವೆ ದಿನಗಳಲ್ಲಿ
ಗಾಯಕನಾದ
ನಟನಾದ
ಕಲೆಗೆ ಮೆಚ್ಚಿ ನಾಟಕದ ಕಂಪನಿ ಮಾಲಿಕ ನೀಡಿದ ದಿನಕ್ಕೆ ನೂರು ರೂ ಜೇಬಿಗಿಳಿಸಿ
ರಸ್ತೆಗುಂಟಾ ಅದೇ ಹಾಡುಗಳನ್ನು ಗುಣುಗುತ್ತಾ ತನ್ನಾ ಮನೆ ಸೇರುತ್ತಿದ್ದ.

ದಿನಾ, ವಾರ, ತಿಂಗಳು ಹಾಗೆಯೇ ವರ್ಷಗಳು ಕಳೆದಂತೆ
ತಾಲೀಮು ನೆಡೆಸುತ್ತಿದ್ದ ಜಾಗ ದೊಡ್ಡ ಮನೆಯಾಗಿ ಬೆಳೆಯತೊಡಗಿತ್ತು.
ಅಕ್ಕ ಪಕ್ಕದ ಜಾಗಗಳೆಲ್ಲಾ ಒಂದಾಗಿ ಅವುಗಳಿಗೊಂದು ತಡಗೋಡೆ ಕಟ್ಟಲ್ಪಟ್ಟಿತು.

ಹುಡುಗ ನೂರಾರು ಹಾಡುಗಳ ಕಲಿತ ನಾಟಕಗಳ ಕಲಿತ.
ಅವ್ವ ಬೈದಳು ಮುಂದೊಂದು ದಿನ
ದುಡಿಯುವದನ್ನು ಕಲಿ ಮಗ...

ನಾಟಕ... ನಾಟಕ... ಬೀದಿ ನಾಟಕ...

Wednesday, June 17, 2009

ಅಕ್ಷರಗಳಲ್ಲದ ...


ನಕ್ಕ ಮನಸು...


ಅತ್ತ ಕನಸು...


ಬಿತ್ತದೆ ಬಹು ಫಸಲಾಗಿ ಬೆಳೆದ ಕಷ್ಟಗಳು...


ಬೆಳೆದದ್ದಕ್ಕಿಂತ ಕಟಾವಿಗೆ ಅತಿಹೆಚ್ಚು ಸಮಯ ತೆಗೆದುಕೊಳ್ಳುವ ಭಯ...!


ಬಹುರಾಷ್ಟ್ರೀಯ ಕಂಪನಿಗಳಿಗಿಂತ ಕೆಟ್ಟದಾಗಿ ನೆಡೆಸಿಕೊಳ್ಳುವ ಹಣೆಬರಹ...


ನಾ.... ರೈತ... ನಾ... ಗಾರೆಯವ.... ನಾ...ತಂತ್ರಜ್ಞಾನಿ

ಸುಮ್ಮನೆ ಬರೆದೆ


ನಾಗತಿಹಳ್ಳಿ ಲೆಕ್ಕಾಚಾರ ಮತ್ತು ಆತ ಸೃಷ್ಟಿಸಿರುವ ಕೆಲವು ಪಾತ್ರಗಳ ಬಗ್ಗೆ ಹೇಳುವುದಾದರೆ ಸಿನಿಮಾದಲ್ಲಿ ಒಂದು ರೀತಿಯಲ್ಲಿ ಹಲವು ಪಾತ್ರಗಳು ನಾವು ಕೇಳಿದ ಮತ್ತು ನೋಡಿದ ಕೆಲವು ನಿಜ ವ್ಯಕ್ತಿಗಳನ್ನು ಕುರಿತದ್ದಾಗಿವೆ.
ರಂಗಾಯಣ ರಘು ಬಾರ್ನಲ್ಲಿ ಚಮಚಗಳನ್ನು ಕದಿಯುವು ಪಾತ್ರ ನಮ್ಮ ನಾಟಕ ಅಕಾಡೆಮಿಯ ಹಿಂದಿನ ಅಧ್ಯಕ್ಷರಾಗಿದ್ದ ಒಬ್ಬ ಪ್ರತಿಷ್ಟಿತ ನಾಟಕಕಾರನ ಚಟವಾಗಿದೆ. ಅವರು ಚಮಚ 'ಮತ್ತಿತರೆಯ(ರು)'ರನ್ನು ಕದ್ದರೆ ಅದು ತಪ್ಪಲ್ಲ ಬದಲಾಗಿ ಅದೊಂದು ಅವರ ಸ್ಪೇಷಲ್ ಟಾಲೆಂಟ್.
ನಾಗತಿಹಳ್ಳಿ ಕೆಲವರ ಪಟ್ಟಿ ಮಾಡಿ ಅದಕ್ಕೆ ತಕ್ಕಂತೆ ಕಥೆಚಿತ್ರಕಥೆ ಹೆಣೆದಿದ್ದಾರೆ. ಹೀಗೆ ಅವರು ನಿರ್ಧರಿಸಿ ನಿದರ್ೇಶಿಸಿರುವ ಸಿನಿಮಾದಲ್ಲಿ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ರಂಗಾಯಣ ರಘು ಮತ್ತೊಂದು ಕಡೆ ನವಿಲುಗರಿ ಚಾನೆಲ್ಲಿನ ಮುಖ್ಯಸ್ಥ ಬಾಲಾಜಿ ಜೊತೆ ಮಾತನಾಡುವುದು ಮತ್ತು ಅದರ ಕಲಾ ನಿದರ್ೇಶಕ ಅರುಣ್ ಸಾಗರ್ ಸೆಟ್ವಕರ್್ ಬಗ್ಗೆ ಗೇಲಿ ಮಾಡುವುದು ಹಾಗೆಯೇ ನವಿಲುಗರಿ ಚಾನೆಲ್ ಮಾಲಿಕರಿಗೆ ಚಂಡಿಯಾಗ ಮಾಡಿಸುತ್ತೇನೆ ಎಂದು ಹೇಳುವುದೆಲ್ಲಾ ನಮ್ಮ ಕನ್ನಡ ಕಸ್ತೂರಿ ಚಾನೆಲ್ ಕುರಿತಾಗಿದ್ದು ಮತ್ತು ಅದರ ಮಾಲಿಕ ಯಜ್ಞಯಾಗದಿಗಳ ಒಡೆಯರಾದಂತ ಅದರ ಮಾಲಿಕರಾದ ಮಹಾನ್ ದೈವಭಕ್ತರಾದ ಸನ್ಮಾನ್ಯ ಶ್ರೀ ದೇವಗೌಡ ಮತ್ತು ಅವರ ಮಗ ಮರಿ ಸನ್ಮಾನ್ಯ ಸಿ(ರೆ)ರಿ ಕುಮಾರಸ್ವಾಮಿಯವರಾಗಿದ್ದಾರೆ.
ಸಿನಿಮಾದ ಸೆಕೆಂಡ್ ಆಫ್ನಲ್ಲಿ ರಂಗಾಯಣ ರಘು ಒಬ್ಬ ಜ್ಯೋತಿಷಿಯಾಗಿ ಬದಲಾಗುವ ಪಾತ್ರವನ್ನು ನಾವು ಈ ಬ್ರಹ್ಮಾಂಡದಲ್ಲಿ ಸಾಕಷ್ಟು ಜನರನ್ನು ಕಾಣಬಹುದು, ಸ್ವಲ್ಪ ಕೆದಕಿ ನೋಡಿದರೆ ಬ್ರಹ್ಮಾಂಡದ ಇತಿಹಾಸದಲ್ಲಿ ಆ ಪಾತ್ರವನ್ನು ನಾವು ಕಾಣಬಹುದು.
ಸಿನಿಮಾದ ಫಸ್ಟ್ ಆಫ್ನಲ್ಲಿ ರಂಗಾಯಣ ರಘುವಿನ ಪಾತ್ರ ತುಂಬಾ ಬೋರ್ ಹೊಡಿಸುತ್ತದೆ ಜೊತೆಗೆ ಪ್ರೇಕ್ಷಕನಿಗೆ ರಘುವಿನ ಪಾತ್ರದ ಮೇಲೆ ಸಿಟ್ಟು ಬರುವತನಕ ನಾಗತಿಹಳ್ಳಿ ಎಳೆದು ತರುತ್ತಾರೆ. ಇದು ಒಂದು ರೀತಿಯಲ್ಲಿ ಅವರು ಪ್ರೇಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗತಿಹಳ್ಳಿ ಇತ್ತೀಚಿಗೆ ಏನನ್ನೊ ಹುಡಕಲು ಒಂಟವರಂತೆ ಕಾಣುತ್ತಾರೆ, ಒಂದು ರೀತಿಯಲ್ಲಿ ಅವರು ಕಮಷರ್ಿಯಲ್ ಮೂಲಕ ಕ್ಲಾಸಿಕಲ್ ಸಿನಿಮಾ ಮಾಡಲು ಹೊಸ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ ಅನಿಸುತ್ತದೆ ಆದರೆ ಹಾದಿ ಸುಗಮವಿಲ್ಲ.
ಸಿನಿಮಾದಲ್ಲಿ ರಘುವಿನ ಬದಲಾವಣೆಯನ್ನು ನಿದರ್ೇಶಕರು ತುಂಬಾ ಅರ್ಥಗಬರ್ಿತವಾಗಿ ತೋರಿಸಿದ್ದಾರೆ. ಮೊದಲ ಆಫ್ನಲ್ಲಿ ಮನುಷ್ಯ ಬದುಕಲಿಕ್ಕೇ ಮಾತೊಂದಿದ್ದರೆ ಸಾಕು ಎನ್ನುವ ರಘುವಿನ ಧ್ಯೇಯ ವಾಕ್ಯದಂತೆ ಅವನ ಪಾತ್ರ ಸೆಕೆಂಡ್ ಆಫ್ನಲ್ಲಿ ಜ್ಯೋತಿಷ್ಯವನ್ನು ಆರಿಸಿಕೊಳ್ಳುವುದು ಮತ್ತೇ ಮೋಸ ಮಾಡುವ ಪ್ರವೃತ್ತಿಗೆ ಇನ್ನೊಂದು ಮುಖ ಹೊಂದಿಸುವುದು. ಮೋಸ ಹೋಗುವವರು ಇರುವತನಕ ಮೋಸ ಮಾಡುವವರು ಇರುತ್ತಾರೆ. ಇದು ಮೇಲ್ನೋಟಕ್ಕೆ ಕಾಣುವ ಚಿತ್ರದ ಸಾರಂಶ.
ಎಡಪಂಥ ಅಥಾವ ಬಲ ಪಂಥ ಎನ್ನುವುದಕ್ಕಿಂತ ಬದುಕ ಪಂಥ ಬಹು ಮುಖ್ಯ ಮತ್ತು ಅದರ ಶೃಂಗಾರವನ್ನು ಕಳೆದುಕೊಳ್ಳಬೇಡಿ ಎನ್ನುವುದಕ್ಕೆ ಉದಾಹರಣೆಯಾಗಿ ಕಿಟ್ಟಿ ಉಳಿದುಕೊಳ್ಳುವ ಅಪಾಟರ್್ಮೆಂಟ್ನ ಸೆಕ್ಯುರಿಟಿಯ ಗಂಡ ಹೆಂಡತಿ ಪ್ರೀತಿಗೆ ಕಿಟ್ಟಿ ಮರಳಾಗುತ್ತಾನೆ ಹೊರತಾಗಿ ರಂಗಾಯಣ ರಘುವಿನ ಮೇಲಿನ ಸಿಟ್ಟಿನಿಂದಲ್ಲ.
ಮನುಷ್ಯನ ಜೀವನ ಕೊಡುಕೊಳ್ಳುವಿಕೆಯಲ್ಲಿ ಅವಲಂಬಿಸಿದೆ, ಅದು ಪ್ರೀತಿಯಾಗಿರಬಹುದು, ಹಣವಾಗಿರಬಹುದು ಅಥಾವ ಮತ್ತೀನ್ನೇನು ವಸ್ತುವಾಗಿರಬಹುದು. ಜೀವನವನ್ನು ಪಂಥಗಳ ಲೆಕ್ಕಚಾರಗಳಡಿಯಲ್ಲಿ ತಂದು ಪಂಥಗಳಿಗೆ ಕಟ್ಟುಬಿದ್ದು ನಿಜವಾದ ಬದುಕಿನ ಸಾರವನ್ನು ಕಳೆದುಕೊಳ್ಳಬೇಡಿ.

Monday, May 11, 2009

ತೆರಿಗೆ


ಮಾಡಿದ್ದ ಪ್ರೀತಿಗೆ ತೆರಿಗೆ ಕಟ್ಟುತ್ತಿದ್ದೇನೆ.

ದಯವಿಟ್ಟು ವಿನಾಯಿತಿ ನೀಡು ಗೆಳತಿ

ದೈತ್ಯಾ ಅಮೇರಿಕಾವೇ ತೆರಿಗೆ ವಿನಾಯಿತಿ ನೀಡಿದೆ.

ಅಮೇರಿಕಾಕ್ಕಿಂತ ಕ್ರೂರಳೇ ನೀನು ?

ನೋಡಿದ್ದ ಸ್ವಲ್ಪ ದಿನಗಳಿಗಾಗಿ

ಜೀವನ ಪೂರ್ತಿ ತೆರಿಗೆ ವಿದಿಸಿದೆಯಲ್ಲೇ


ಮಾಡಿದ್ದ ಪ್ರೀತಿಗೆ ತೆರಿಗೆ ಕಟ್ಟುತ್ತಿದ್ದೇನೆ.

ನೀನು ನನಗೆ ಬೇಕು-ಅಂದದ್ದಿಷ್ಟೇ.....

ನಿನ್ನ ಪಡೆಯಲಿಲ್ಲ

ಆದರೂ.......

ಈ ತೆರಿಗೆ ಏಕೆ ?

ರಾಮಾಂಜಿನೇಯ ಕಥೆ ನೆಡೆದದ್ದು ನಮ್ಮೂರಲ್ಲಿ ಗೊತ್ತಾ...!


ಹಂಪಿಯಿಂದ ಕೇವಲ ಮೂರ್ನಾಲ್ಕು ಕಿ.ಮೀ ದೂರದಲ್ಲಿರುವ ನಮ್ಮೂರು ಬಸವನದುರ್ಗ, ಹಂಪಿಯ ಸಾಲುಗುಡ್ಡಗಳ ತುದಿಗಂಟಿಕೊಂಡಂತಿರುವ ನಮ್ಮೂರಿನಲ್ಲಿ ಹತ್ತು ಹಲವು ಕಥೆಗಳಿವೆ. ಬಾಲ್ಯದಲ್ಲಿ ಅಜ್ಜಿ ಕಥೆ ಕೇಳಿ ಪುಳಕಿತರಾಗುತ್ತಿದ್ದ ನಮ್ಮ ಗುಂಪಿನಲ್ಲಿ ರಾಮಾಂಜಿನೇಯ ಎಂಬ ಹುಡಗನಿದ್ದ. ಒಂದು ರೀತಿಯಲ್ಲಿ ನಮ್ಮದು ಪಕ್ಕಾ ಕಪಿಸೈನ್ಯಾ.
ನೋಡಲು ಆ ದೇವರಷ್ಟೇ ಗಟ್ಟಿಮುಟ್ಟಾಗಿದ್ದ ಆ ಹುಡಗನಿಗೆ ಸ್ವಲ್ಪ ಕುಸ್ತಿಯ ಹುಚ್ಚು. ಈಗಲು ನಾನು ಮರೆಯಲಾರದ ಕೊಡಗೆಯನ್ನು ಆತ ನನ್ನ ಎರಡನೆ ತರಗತಿಯಲ್ಲಿಯೇ ನೀಡಿದ್ದಾನೆ, ಒಂದು ರೀತಿಯಲ್ಲಿ ಅದು ಎಂದು ಮರೆಯದ ಮತ್ತು ಸದಾ ನನ್ನೊಳಗೆ ಉಳಿದುಕೊಂಡಿರುವ ನೆನಪು ಮತ್ತು ಗುರುತು.
ನಮ್ಮೂರಲ್ಲಿ ಇದ್ದದ್ದು ಒಂದು ಶಾಲೆ ಮತ್ತು ಒಬ್ಬರೇ ಮೇಷ್ಟ್ರು ಆದರೆ ಒಂದರಿಂದ ನಾಲ್ಕನೇ ತರಗತಿಯವರೆಗಿನ ಕ್ಲಾಸ್ಗಳು. ಒಂದು ಮತ್ತು ಎರಡನೇ ತರಗತಿಯವರು ಹೊರಗಡೆಯ ಹೊರಾಂಗಣದಲ್ಲಿ ಕೂತರೆ ಮೂರು ಮತ್ತು ನಾಲ್ಕನೇ ತರಗತಿಯವರು ಒಳಗಡೆ ಕೂರುತ್ತಿದ್ದರು. ತೀರಾ ಚಿಕ್ಕವರು ಮೇಷ್ಟ್ರು ದ್ವನಿಗೆ ಬೆದರಿದರೆ ದೊಡ್ಡವರು ಅವರ ದೇಹಕ್ಕೆ ಬೆದರುತ್ತಿದ್ದ ಕಾರಣ ಅವರು ಓಳಗಡೆ ಕೂಡುತ್ತಿದ್ದರು.
ಹೀಗಿದ್ದ ನಮ್ಮ ಶಾಲೆಯಲ್ಲಿ ಚೇಷ್ಟೆ ಮತ್ತು ಕುಚೇಷ್ಟೆಗಳಿಗೆ ಪ್ರಖ್ಯಾತವಾಗಿದ್ದ ನಮ್ಮ ಗುಂಪು ಒಂದು ರೀತಿಯಲ್ಲಿ ಮೇಷ್ಟ್ರ ಮೊಸ್ಟ್ ವಾಂಟೆಂಡ್ ಲೀಸ್ಟ್ನಲ್ಲಿತ್ತು. ಯಾರೇ ಮಾತಾಡಲಿ ಒಳಗಡೆಯಿಂದ ಜಡಿ.. ಎಂದು ಕೂಗಿದೊಡನೆ ಎಲ್ಲರು ಸುಮ್ಮನಾಗಿಬಿಡುತ್ತಿದ್ದರು. ಅದು ಹೆಸರಿಗಿರುವ ಇನ್ನೊಂದು ಅರ್ಥವನ್ನು ಸಹಾ ಒಳಗೊಂಡಿರುತ್ತಿತ್ತು.
ನೆನಪಾದಗೊಮ್ಮೆ ನಾವು ಹೊರಗಡೆ ಕುಳಿತ್ತಿದ್ದೇವೆ ಎಂಬ ಅರಿವಾದಗಲೆಲ್ಲಾ ಹೊರಗಡೆ ಬಂದು ಒಂದರಿಂದ ಹತ್ತರತನಕ ಮಗ್ಗಿ ಬರೆಯಬೇಕು ಮತ್ತು ಕಂಠಪಾಟ ಮಾಡಿ ಸಂಜೆ ಕೇಳಿದಾಗ ಒಪ್ಪಿಸಬೇಕು ಎನ್ನುವ ಆಜ್ಞೆಯನ್ನು ಹೊರಡಿಸಿ ಮತ್ತೇ ಒಳಗಡೆ ಕೂರುತ್ತಿದ್ದ ಮೇಷ್ಟ್ರು ಮುಖ ತೊರಿಸುತ್ತಿದ್ದದ್ದು ಮುಂಜಾನೆಯ ಜನ ಗಣ ಮನ... ದಲ್ಲಿ ಮತ್ತು ಸಂಜೆಯ ಜೈ ಭಾರತ ಜನನಿಯ ತನುಜಾತೆಯಲ್ಲಿ ಮಾತ್ರ.
ಹೀಗಿದ್ದ ನಮ್ಮ ಒಂದೇರಡು ಕ್ಲಾಸ್ನ್ನು ಬಿಟ್ಟು ಮೂರನೇ ತರಗತಿ ಬರುದುವುದೇ ಬೇಡ ಎಂಬಲ್ಲಿಗೆ ನಮ್ಮ ಹರಕೆ ಬೆಳದಿತ್ತು.
ನಾನು ಒಂದನೇ ಕ್ಲಾಸ್ ಪಾಸಾಗಿದ್ದಕ್ಕೆ ಅಪ್ಪ ಖುಷಿಯಾಗಿ ಕಲರ್ ಕಲರಾಗಿದ್ದ ಬ್ಯಾಗೊಂದನ್ನು ಕೊಡಿಸಿದ್ದರು. ಅದರ ಪ್ರತಿ ದಾರವು ಕಲರ್ಗಳಿಂದ ಕೂಡಿತ್ತು. ಶಾಲೆಯಲ್ಲಿ ಒಂದು ರೀತಿಯಲ್ಲಿ ನನ್ನ ಗೌರವವನ್ನು ಹೆಚ್ಚಿಸಿದ್ದರು ನನ್ನಪ್ಪ. ಎಲ್ಲರ ಕಣ್ಣು ನನ್ನ ಬ್ಯಾಗಿದ ಮ್ಯಾಲಿತ್ತು.
ದಡೂತಿ ರಾಮ ಅದರ ದಾರಗಳನ್ನು ಒಂದೊಂದಾಗಿ ಎಳೆಯತೊಡಗಿದ್ದ, ಅದು ಪ್ಲಾಸ್ಟಿಕ್ನಿಂದ ಮಾಡಿದ್ದಾಗಿದ್ದರಿಂದ ಅದನ್ನು ಇಂಚಿಂಚಾಗಿ ಅಗೆಯುತ್ತಾ ಅದರ ರಸವತ್ತತೆಯನ್ನು ಅನುಭವಿಸಿ ಕೊನೆಗೊಮ್ಮೆ ಉಗಿದುಬಿಡುತ್ತಿದ್ದ, ಒಂದು ದಿನ ನಂಗೆ ಸಿಟ್ಟು ಬಂದು ಯಾಕೊ ನನ್ನ ಬ್ಯಾಗ್ ಹಾಳ್ ಮಾಡ್ತಿಯಾ ಅಂದದಕ್ಕೆ ನನ್ನ ಸಿಟ್ಟು ಮರೆಸಲು ಆ ದಾರವನ್ನು ನನ್ನ ಕಿವಿವೊಲೆ ಚುಚ್ಚಿ ಪಮೇಂಟಾಗಿ ತೂತಾಗಿದ್ದ ಜಾಗದಲ್ಲಿ ಅದನ್ನು ಎಣೆದು ಚೆಂದಾದ ಮತ್ತು ಕಲರ್ಫುಲ್ಲಾದ ಕಿವಿ ಓಲೆ ಮಾಡಿ ಎಲ್ಲಾರಿಗೂ ತೋರಿಸಿ ಎಷ್ಟು ಚೆಂದ ಕಾಣಿಸ್ತೀಯ ಎಂದು ನನ್ನನ್ನು ಹಿರಿಹಿರಿ ಹಿಗ್ಗಿಸಿದ್ದ.
ಸಂಜೆ ಶಾಲೆ ಬಿಡುವ ಸಮಯವಾಗಿತ್ತು, ಇನ್ನೇನು ಬೆಲ್ ಹೊಡೆದರೆ ನಾವೆಲ್ಲಾ ಲೈನಾಗಿ ನಿಂತು ಜೈ ಭಾರತ ಜನನಿಯ ತನುಜಾತೆ ಹಾಡಿ ಮನೆಗೋಡಲಿಕ್ಕೆ ತಯಾರಿ ನೆಡೆಸಿದ್ದೆವು. ಅಷ್ಟರಲ್ಲಿ ರಾಮಾಂಜಿನಿ ಕಟ್ಟಿದ್ದ ದಾರ ನೆನಪಾಗಿ ಅದನ್ನು ಬಿಚ್ಚಲು ಹೇಳಿದೆ, ಅವ ಹದಿನೆಂಟು ಗಂಟುಗಳನ್ನಾಕಿದ್ದ ಕಾರಣ ಅದು ಅಷ್ಟು ಸಲಿಸಾದ ಕೆಲಸವಾಗಿರಲಿಲ್ಲ. ನಿಧಾನಕ್ಕೆ ಬಿಚ್ಚುತ್ತಿದ್ದ. ಬೆಲ್ ಹೊಡೆದುಬಿಟ್ಟಿತು. ಎಲ್ಲಾರು ಓಡತೊಡಗಿದ್ದರು. ಅವಸರದಲ್ಲಿದ್ದ ನಾನು ಅವನಿಗೆ ' ಎಳೆದರೆ ದಾರ ಹರಿದು ಹೋಗುತ್ತದೆ' ಎಂಬ ಐಡಿಯಾ ಕೊಟ್ಟಿದ್ದೇ ತಡ ಅವನು ಮರು ಮಾತಾಡದೆ ಎಳೆದ.. ದುಂಡಗೆ ಕಟ್ಟಿದ್ದ ದಾರ ಹಾಗೆಯೇ ಅವನ ಕೈಯಲ್ಲಿತ್ತು. ಕಿವಿ ಓಲೆಯ ಜಾಗ ಹರಿದು ಎರಡಾಗಿತ್ತು.
ಕಥೆ ಮುಂದುವರೆಯುತ್ತೇ.ಕಾರಣ ಇದು ಮಹಾಕಾವ್ಯ ರಾಮಾಂಜೆನೇಯ ಚರಿತಾ..

Tuesday, May 5, 2009

ಕ್ರಿಕೆಟ್ ಮತ್ತು ನಾನು


ಕ್ರಿಕೆಟ್ ಕ್ರಿಡಾಂಗಣದಲ್ಲಿ ಆಡಿದ್ದಕ್ಕಿಂತ ಆರು ಕಲ್ಲು ಹಿಡಿದು ಅಂಪೈರಾಗಿದ್ದೇ ಹೆಚ್ಚು

ತಂಡದ ಎಲ್ಲಾ ಗೆಳೆಯರ ಆಟ ಮುಗಿದ ಮೇಲೆ ಕೊನೆಗೊಂದು ಬಾಲ್ ನಂದು

ಕಷ್ಟಪಟ್ಟು ಬಾಲ್ ಮಾಡಿದಾಗ ಬ್ಯಾಟ್ಸ್ಮನ್ ಸಿಕ್ಸ್ ಹೊಡೆದ

ನನ್ನ ಬದಲು ನಾ ನೇಮಿಸಿದ್ದ ನನ್ನ ಪ್ರತಿನಿದಿ ಅಂಪೈರ್ ನೊ ಬಾಲ್ ಅಂದ

ಬೇಜಾರಾಯಿತು.

ಈ ಸಲ ನಾನು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ್ದೆ

ನನ್ನ ಹಟಕ್ಕೆ ಮಣಿದ ಗೆಳೆಯರ ಪ್ರೀತಿಗೆ ನಾನು ಇಂದಿಗೂ ಚಿರಋಣಿ

ಬ್ಯಾಟ್ ಮಾಡಿದ ಬರದಲ್ಲಿ ಒಂದು ಸುತ್ತು ತಿರುಗಿದ ನನಗೆ ಕಂಡಿದ್ದು

ನಾನೇ ಉರುಳಿಸಿದ್ದ ವಿಕೆಟ್ಗಳು ಮತ್ತು ಕೈ ಜಾರಿ ಮಾರುದ್ದ ಬಿದ್ದ ನನ್ನ ಬಾಟ್

ಹೊಡೆಯುವದು ಮುಖ್ಯವಲ್ಲ ಜೌಟಾಗದಂತೆ ಆಡಬೇಕು ಎನ್ನುವ ಗೆಳೆಯರ ಮಾತಿಗೆ ತಕ್ಕಂತೆ ಆಡಿದ್ದೆ

'ಅಪ್ಪಿ ತಪ್ಪಿ ಬಾಲ್ ವಿಕೆಟ್ಗೆ ಬಿದ್ದರೆ ಎಂಬ ಭಯದಿಂದ

ನಾನೇ ವಿಕೆಟ್ಗಳನ್ನು ಬೀಳಿಸಿದ್ದೆ ಮತ್ತೇ ಬಾಲ್ಗೆ ದಾರಿ ಮಾಡಿಕೊಟ್ಟೆ'- ಎಂದು ಈಗಲೂ ನನ್ನ ಗೆಳೆಯರು ನಗುತ್ತಾರೆ.

ಮಾರೆಮ್ಮ ಮತ್ತು ಮೋಹಿರಮ್ಮ



ದೂರದ ಉತ್ತರ ಕನರ್ಾಟಕದಿಂದ ಬಂದಿದ್ದ ನಾನು ಡಿಗ್ರಿ ಮುಗಿಸಿದ್ದು ದಿ ಗ್ರೇಟ್ ಮಹಾರಾಜ ಕಾಲೇಜಿನಲ್ಲಿ, ಇಂಗ್ಲೀಷ್ ಬಾರದ ನನಗೆ ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿಸಿದ್ದು ನನ್ನ ಮಹಾರಾಜ ಕಾಲೇಜ್. ನನ್ನ ಮಾಸ್ಟರ್ ಡಿಗ್ರಿಯಲ್ಲಿ ಇಂಗ್ಲೀಷ್ ಮಾತನಾಡಲೂ ಬರದಿದ್ದ ನನಗೆ ಆಗಲೇ ಇಂಗ್ಲೀಷ್ ಅರ್ಥವಾಗತೊಡಗಿತ್ತು.
ನನ್ನ ತರಗತಿಯಲ್ಲಿ ಪರಿಚಯವಾದವಳು ಮೋಹಿರಾ ಫ್ರಮ್ ಉಜ್ಬೇಕಿಸ್ತಾನ್, ಕೇವಲ ಕನರ್ಾಟಕದಲ್ಲಿ ಜಿಲ್ಲೆಯ ಗಡಿಗಳನ್ನು ದಾಟಿ ಬಂದಿದ್ದ ನನಗೆ ನಿಜವಾಗಲೂ ಸ್ಪೂತರ್ಿಯಾಗಿದ್ದು ದೇಶದ ಗಡಿಗಳನ್ನು ದಾಟಿ ಬಂದಿದ್ದ ನನ್ನ ಕ್ಲಾಸ್ಮೇಟ್ಗಳು. ಅವರಲ್ಲೊಬ್ಬಳಾದ ಮೋಹಿರಳ ಬಗ್ಗೆ ನನ್ನ ಈ ಕತೆ.
ಅವಳು ತುಂಬಾ ಗಟ್ಟಾಣಿಗಿಂತಿ, ಪ್ರತಿಯೊಂದಕ್ಕೂ ಪ್ರತಿಯುತ್ತರ ನೀಡುತ್ತಿದ್ದ ಸ್ಟ್ರಾಂಗೆಸ್ಟ್ ವುಮೆನ್. ದಿನ ಕಳೆದಂತೆ ಅವಳ ಮತ್ತು ನನ್ನ ನಡುವೆ ಸ್ನೇಹ ಬೆಳೆಯುತ್ತಾ ಸಾಗಿತ್ತು. ಅವಳಿಗೆ ಪ್ರತಿಯುತ್ತರ ನೀಡಲಾಗದ ಪರಿಸ್ಥಿತಿಯಲ್ಲಿದ್ದ ನನಗೆ ಅರ್ದಂಬದ್ದ ಇಂಗ್ಲೀಷ್ ಕಲಿಸಿದವಳು ಅವಳೆ, ಅವಳಿಗೆ ನಾನು ಚಿರಋಣಿ.
ಮೋಹಿರ ತುರಕರ ದೇಶದಿಂದ ಬಂದವಳಾಗಿದ್ದ ಕಾರಣ ದಿನ ತಪ್ಪಂದಂತೆ ನಮಾಜ್ ಮಾಡುತ್ತಿದ್ದಳು ಉಳಿದಂತೆ ತುಂಬಾ ಮಾಡ್ರನ್ ಹೆಣ್ಣಾಗಿದ್ದಳು.
ದಿನ ಕಳೆದಂತೆ ನಮ್ಮ ಇಲ್ಲಿಯ ತನಗಳನ್ನು ಬೆಳಸಿಕೊಳ್ಳುತ್ತಾ ಅವಳು ಮೈಸೂರಿನಲ್ಲಿ ನೆಡೆಯುತ್ತಿದ್ದ ಸ್ಥಳೀಯ ಹಬ್ಬ ಹರಿದಿನಗಳಿಗೆ ಬೇಟಿ ನೀಡತೊಡಗಿದಳು. ತರಗತಿಗೆ ಬರುವ ಸಮಯದಲ್ಲಿ ಅಥಾವ ಹಾದಿಯಲ್ಲಿ ವಾದ್ಯಗಳ ಶಬ್ದ ಕೇಳಿದರೆ ಸಾಕು ಅವತ್ತು ಅವಳು ತರಗತಿಗೆ ಚಕ್ಕರ್. ಹೇಳಿ ಕೇಳಿ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದ ಅವಳು ಕುಕ್ಕರಳ್ಳಿ ಕೆರೆ ಹಳ್ಳಿಯನ್ನು ದಾಟಿ ಬರಬೇಕಿತ್ತು, ಬೆಳೆದ ಮೈಸೂರಿನಲ್ಲಿ ಇನ್ನೂ ಹಳ್ಳಿಯ ಸೊಗಡು ಮತ್ತು ಆಚರಣೆಗಳನ್ನು ಉಳಿಸಿಕೊಂಡಿರುವ ಈ ಹಳ್ಳಿಯಲ್ಲಿ ಒಂದಲ್ಲಾ ಒಂದು ಎನ್ನವಂತೆ ಆಚರಣೆಗಳಿರುತ್ತಿದ್ದವು.
ಮೊದಲನೇ ವರ್ಷದಲ್ಲಿ ಇಲ್ಲಿ ನೆಡೆದ ಗ್ರಾಮ ದೇವತೆ ಆಚರಣೆಯನ್ನು ನೋಡಲು ಕುಳಿತಿದ್ದ ನಮಗೆ ಹಳ್ಳಿಯವರು ಆಡಿದ್ದ ನಾಟಕ ಮತ್ತು ಇತರೆ ಎಲ್ಲಾ ದೃಶ್ಯಗಳನ್ನು ಅವಳಿಗೆ ನಾನು ಟ್ರಾನ್ಸ್ಲೇಟ್ ಮಾಡುವುದರಲ್ಲಿಯೇ ಕಳೆದಿದ್ದೆ. ಅವಳನ್ನು ಕಂಡರೆ ಭಯವಾಗತೊಡಗಿದ್ದ ನನಗೆ ಅವಳಿಂದ ತಪ್ಪಿಸಿಕೊಳ್ಳುವುದೆ ಹರ ಸಹಾಸವಾಗಿತ್ತು.
ಅವಳಿಗೆ ನನ್ನ ಸ್ನೇಹ ಅತ್ಯಗತ್ಯವಾಗಿತ್ತು ಕಾರಣ ಒಂದು ನನಗೆ ಇವೆಲ್ಲಾ ಆಚರಣೆಗಳು ಇಷ್ಟಾ ಎರಡು ಅವಳಿಗೆ ಮಾಹಿತಿ ನೀಡುವವರು ಬೇಕಾಗಿತ್ತು ಮೂರನೆಯ ಅತಿ ಮುಖ್ಯ ಕಾರಣವೆಂದರೆ ನನ್ನ ಹಾಸ್ಟೆಲ್ ಅವಳ ಮನೆಯ ಸಮೀಪದಲ್ಲಿದ್ದ ಕಾರಣ ತೀರಾ ಕೈಗೆಟುಕುವ ಗೆಳೆಯನಾಗಿದ್ದೆ.
ಹೀಗೆ ದಿನಾ ಕಳೆದಂತೆ ಅವಳು ನಮ್ಮ ಆಚಾರ ವಿಚಾರಗಳ ಬಗ್ಗೆ ಕೇವಲವಾಗಿ ಮಾತನಾಡತೊಡಗಿದಳು, ಇದರಿಂದ ಕೋಪಗೊಂಡ ನಾನು ಇನ್ನೂ ಮುಂದೆ ಅವಳ ಜೊತೆ ತಿರುಗಾಡುವುದಿಲ್ಲ ಎಂದು ಶಪತು ತೊಟ್ಟು ಅವಳ ಮುಖದ ಮೇಲೆ ಹೊಡೆದಂತೆ 'ಐ ಡೊಂಟ್ ವಾಂಟ್ ಯುವರ್ ಫ್ರೆಂಡ್ಶಿಪ್' ಎಂದು ಹೇಳಿಬಿಟ್ಟಿದ್ದೆ.
ಇದೆಲ್ಲಾ ಮುಗಿಯುವದರೊಳಗೆ ಒಂದು ವರ್ಷ ಕಳೆದಿತ್ತು, ಬೇಸಿಗೆಯ ರಜಕ್ಕಾಗಿ ನನ್ನೂರಿಗೆ ತೆರಳಿದ್ದ ನಾನು ಮನೆಯವರೊಂದಿಗೆ ಮತ್ತು ನನ್ನ ಬಾಲ್ಯ ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುತ್ತಿದ್ದೆ. ನಡುವೆ ಒಂದು ನಡುರಾತ್ರಿಯಲ್ಲಿ ನನ್ನ ಫೋನ್ ರಿಂಗಣಿಸತೊಡಗಿತ್ತು ಇದರಿಂದ ಕೋಪಗೊಂಡ ನನ್ನಪ್ಪ ಇವನೇನು ದೊಡ್ಡ ವ್ಯವಾರಸ್ಥ ನಡರಾತ್ರ್ಯಾಗ ಇವನಿಗೆ ಫೋನ್ ಬತರ್ಾವೆ ಅಂದದ್ದಕ್ಕೆ ಕಾಲ್ ಯಾರದು ಎಂದು ಸಹಾ ನೋಡದೆ ನಾನು ಅದರ ಕತ್ತು ಹಿಸುಕಿ ಕೊಲೆ ಮಾಡಿ ತಿರುಗಿ ಮಲಗಿಬಿಟ್ಟೆ.
ಮಾರನೆ ದಿನ ಮದ್ಯಾಹ್ನ ಅವಳಿಗೆ ಫೋನ್ ಮಾಡಿದೆ, ಕ್ಷೀಣ ದ್ವನಿಯಲ್ಲಿ ' ಐ ವಾಂಟ್ ಕಮ್ ಯುವರ್ ಹೋಮ್, ಐ ಯಮ್ ಮಿಸ್ಸಿಂಗ್ ಮೈ ಹೋಮ್. ಇಯರ್ ಎವರಿಬಡಿ ವೆಂಟ್ ದೇರ್ ನೇಟಿವ್.' ಒಂದು ಕ್ಷಣ ತಳಮಳಗೊಂಡ ನಾನು ಒಂದು ನಿಮಿಷ ಎಂದು ಫೋನ್ ಕಟ್ ಮಾಡಿದೆ.
ನನ್ನ ಸಮಸ್ಯೆ ಬೇರೆಯ ತರದಾಗಿತ್ತು. ಹುಡುಗಿ ಮನೆಗೆ ಬರ್ತಾಳೆ ಎನ್ನುವುದು. ಉತ್ತರ ಕನರ್ಾಟಕದಲ್ಲಿ ಇನ್ನೂ ಎಲ್ಲಾ ತರದ ಸಮಸ್ಯೆಗಳು ಇರುವ ಕಾರಣ ಮತ್ತು ಹಿಂದುಳಿದ ನಾಡಗಿರುವ ಕಾರಣ ಅಷ್ಟು ಸುಲಬದ ವಿಷಯವಾಗಿರಲಿಲ್ಲ ನನಗೆ, ಅವಳು ನನ್ನ ಮನೆಗೆ ಬರುವುದು ಸಣ್ಣ ವಿಷಯವಲ್ಲ. ನನ್ನ ಮನೆಯವರಿಗೆ ಲವ್ ಪದ ಬಿಟ್ರೆ ಬೇರೆ ಪದ ಗೊತ್ತಿರಲಿಲ್ಲ ಮತ್ತು ಅದಕ್ಕೆ ಬೇರೆಯದೆ ಅರ್ಥವಿದ್ದ ಕಾರಣ ನಾನು ಒಂದು ಕ್ಷಣ ವಿಚಲಿತನಾದೆ. ಅವಳಿಗೆ ಫೋನ್ ಮಾಡಿ ' ನಾನು ನಮ್ಮ ಮನೆಯಲ್ಲಿಲ್ಲ, ಬೇರೆ ಕಡೆ ಇದ್ದೇನೆ, ನನ್ನ ಮನೆಯವರು ಸಹಾ. ನಾನು ಇವತ್ತು ಮೈಸೂರಿಗೆ ಬರುತ್ತಿದ್ದೇನೆ ಡೋಂಟ್ವರಿ' ಎಂದು ಕಟ್ ಮಾಡಿದೆ.
ಮನೆಯಲ್ಲಿ ಒಂದು ಸ್ವಲ್ಪ ಸುಳ್ಳು ಮತ್ತು ಒಂದ್ ಸ್ವಲ್ಪ ಸತ್ಯ ಹೇಳಿ ಗೆಳೆಯನಿಗೆ ಆಕ್ಸಿಡೆಂಟಾಗಿದೆ, ಅವನು ಬೇರೆ ಊರವನು ಮನೆಯಲ್ಲಿ ತುಂಬಾ ಬಡವರು ನಾನು ಹೋಗಬೇಕು ಅವನಿಗೆ ನನ್ನ ಅಗತ್ಯ ಇದೆಯೆಂದು ಹೇಳಿ ಹೊರಟುಬಿಟ್ಟೆ.
ಅಷ್ಟೆತ್ತರದ ದಡೋತಿ ಹುಡುಗಿ ಸಣಕಲಾದಂತೆ ಕಂಡಳು, ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ತನ್ನ ದಿನವನ್ನೆಲ್ಲಾ ಮನೆಯಲ್ಲೇ ಕಳೆಯುತ್ತಿದ್ದಳು. ಅವಳಿಗೆ ನನ್ನ ಸಮಾದಾನ ಅಸಮದಾನ ತರಿಸಿತ್ತು. ಪ್ರತಿ ಮಾತಿಗೂ ಯು ಕಾಂಟ್ ಅಂಡರ್ಸ್ಟಾಂಡ್ ಮೈ ಪೇನ್ ಎನ್ನುತ್ತಿದ್ದಳು. ಅವಳು ಏನೇ ಹೇಳಿದರು ಸಿಟ್ಟು ಬರಲಾರದಂತ ಸಂಧಿಗ್ಧತೆಯಲ್ಲಿ ಎಲ್ಲಾ ಗೆಳೆಯರನ್ನು ಇರಿಸಿದ್ದಳು.
ಮತ್ತೇ ಕಾಲೇಜ್ ಪ್ರಾರಂಭವಾಯಿತು, ಅವಳು ತರಗತಿಗಳಿಗೆ ಚಕ್ಕರ್ ಹಾಕತೊಡಗಿದ್ದಳು. ಬರೀ ನಮಾಜಿನಲ್ಲಿ ತಲ್ಲೀನಳಾಗತೊಡಗಿದ್ದಳು. ಮೊದಲ ವರ್ಷದಲ್ಲಿದ್ದ ಅವಳ ಲವಲವಿಕೆ ನಿಧಾನಕ್ಕೆ ಮಾಯವಾಗತೊಡಗಿತು. ಜನರಲ್ಲಿ ಬೆರೆಯುವದನ್ನು ನಿಲ್ಲಿಸತೊಡಗಿದ್ದಳು.
ಮತ್ತೇ ಹಲಗೆಯ ನಾದ ಕುಕ್ಕರಳ್ಳಿ ಕಡೆಯಿಂದ ಕೇಳಿಸಿತು, ಗ್ರಾಮದೇವತೆ ಹಬ್ಬಕ್ಕೆಂದು ಊರಿಗೆ ಊರೆ ತಯಾರಿ ನೆಡೆಸಿತ್ತು. ಅದೆಲ್ಲಿಂದ ಬಂತೊ ಅವಳಿಗೆ ಉತ್ಸಾಹ ತನಗೆ ಅರ್ಥವಾಗದ ಮತ್ತು ಗೊತ್ತಿರದ ದೇವತೆ ಮುಂದೆ ನಿಂತು ಮುಖವರಳಿಸಿದಳು. ಮಾರೆಮ್ಮ ಇಜ್ ಲೈಕ್ ಮೋಹಿರಮ್ಮನಾ, ಇಟ್ಸ್ ಬಿಟ್ ಸಿಮಿಲರ್ನಾ ಎಂದಳು ?
ಈಗ ತನ್ನ ದೇಶದಲ್ಲಿರುವ ಅವಳು ಕಾಲ್ ಮಾಡಿದಾಗಲೆಲ್ಲಾ ಮಾರೆಮ್ಮನಿಗೆ ಪ್ರೇ ಫಾರ್ ಮಿ ಅಂತಾಳೆೆ. ನಾವು ನೋಡಿದ್ದ ಹಬ್ಬಗಳ ಅಪ್ಡೇಟ್ ಕೇಳ್ತಾಳೆ. ಪ್ರತಿ ಹಬ್ಬಕ್ಕೂ ವಿಷ್ ಮಾಡ್ತಾಳೆ.

ಎಲ್ಲಾ ತಪ್ಪುಗಳ ಹಿಂದೊಂದು ಸರಿ ಕಾಣಿಸತೊಡಗಿದೆ.


ಬಿರು ಬೇಸಿಗೆಯ ಕೊನೆಯ ದಿನಗಳು, ಬಿಸಿಲಿನಿಂದ ಬೆಂದು ಬೇಸತ್ತಿದ್ದ ಜೀವಕ್ಕೊಂದು ತಣ್ಣನೆಯ ಸುಯ್ಗಾಳಿ, ಕಛೇರಿಯ ಕೆಲ ಘಟನೆಗಳನ್ನು ಮೆಲುಕು ಹಾಕುತ್ತಾ ಬೀಳುತ್ತಿದ್ದೇನೆ ಎಂಬ ಮಳೆಯ ಬೆದರಿಕೆಗೆ ಬೆನ್ನಕೊಟ್ಟು ಕಛೇರಿಯಿಂದ ಹೊರಬಿದ್ದ ನನ್ನ ತಲೆಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬ ಬಿಸಿ ಬಿಸಿ ಚಚರ್ೆ ನೆಡೆದಿತ್ತು ಆದರೆ ನಾನು ಮಳೆ ಬರುವ ಮುಂಚಿನ ತಣ್ಣನೆ ಗಾಳಿಯಲ್ಲಿ ಮೈ ಮರೆತು ನಡೆದಿದ್ದೆ.
ದೂರದ ಊರಿನಿಂದ ಬಂದು ಇಲ್ಲಿ ಮಾಡುತ್ತಿರುವದಾದರು ಏನು ಎಂಬುದು ನನ್ನೊಳಗೆ ನಾನು ಕಂಡುಕೊಂಡ ಬಹಳದಿನಗಳ ನಂತರದ ಸತ್ಯವಾಗಿತ್ತು. ಕನಸುಗಳ ಬೆನ್ನತ್ತಿ ಓಡಲು ಪ್ರಾರಂಬಿಸಿದ ನಾನು ಇಂದು ಬಾರ್ಗಳ ಮುಂದೆ ಬಂದು ನಿಂತಿದ್ದೇನೆ ಎಂಬ ಭಯಾನಕತೆಯನ್ನು ನೆನೆದು ದುಗಡಗೊಂಡಿದ್ದೆ. ಕುಡಿಯುವದನ್ನು ಬಿಟ್ಟು ಇತರೆ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂಬ ಬಹುದಿನಗಳ ಬಹು ಚಚರ್ಿತ ವಿಷಯ ಯಾಕೊ ಇತ್ತೀಚಿಗೆ ಸವಕಲಾಗಿ ಕುಡಿಯುವದು ತಪ್ಪಲ್ಲ ಅದು ನಮ್ಮ ನೋವಗಳನ್ನು ಮರೆಸಿ ಕ್ಷಣಕಾಲದ ಸುಖ ನೀಡುತ್ತದೆ ಎಂಬಲ್ಲಿಯ ತನಕ ಕಟು ಸತ್ಯ ಮುಟ್ಟಿಬಿಟ್ಟಿದ್ದೇನೆ.
ಬಹಳ ದೊಡ್ಡ ಕನಸುಗಳನ್ನೊತ್ತು ಮನೆಯಲ್ಲಿ ಅರ್ಥವಾಗದ ವಿಷಯಗಳನ್ನು ಓದಿ ಅವರೊಂದಿಗೆ ಮನಸ್ಥಾಪವನ್ನು ಕಟ್ಟಿಕೊಂಡಿದ್ದ ನನಗೆ ಓದು ಮುಗಿದ ಮೇಲೆ ನನಗೆ ಸಿಕ್ಕ ಸಂಬಳವ ನೆನೆದು ಮನೆಯವರೆಲ್ಲಾ ತಪ್ಪಾಯ್ತು ಎಂದು ಕಪ್ ಕಪಾಳ ಹೊಡೆದುಕೊಂಡಾಗ ಕೊಂಚ ಮನಸ್ಸಿಗೆ ನೆಮ್ಮದಿಯಾಗಿತ್ತು. ಚಿಕ್ಕವನಿಂದ ಅತಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಬೆಳೆದವನು. ದೊಡ್ಡ ದೊಡ್ಡ ಕನಸುಗಳ ಹೊತ್ತ ಮೈ ಬಾರಕ್ಕೆ ದಣಿವಾದಾಗ ಫೇಲ್ ಆದೆನೇನು ಎಂಬ ಸಣ್ಣ ಡೌಟು ಈಗಲು ನನ್ನ ತಲೆಯಲ್ಲಿದೆ.
ಹುಟ್ಟಿದ್ದು ಮತ್ತೆಲ್ಲೊ ಓದಿದ್ದು ಮತ್ತೆಲ್ಲೊ ಬದುಕುತ್ತಿರುವುದು ಮತ್ತೆಲ್ಲೊ ಎಂಬ ಈ ಮತ್ತೆಲ್ಲೊಗಳ ನಡುವೆ ಇಂದು ರಿಯಲೈಸ್ ಆಗಿರುವ ಮತ್ತೊಂದು ಮತ್ತೆಲ್ಲೊ ಎಂದರೆ ನಾನು ಮತ್ತೆ ಅದೆಲ್ಲಿಗೆ ಓಡುತ್ತೇನೆ ಎಂಬ ಭಯ ಕಾಡತೊಡಗಿದೆ. ಹಳ್ಳಿಯನ್ನು ಬಿಟ್ಟು ಅಪ್ಪ ಅವ್ವನ ಸಾಂಗತ್ಯ ಬಿಟ್ಟು ಕೇವಲ ಹಣಕ್ಕಾಗಿ ದುಡಿಯುತ್ತಿದ್ದೇನೆ ಎಂಬ ಭಾವನೆ ಇಂದು ನನ್ನನ್ನು ಮತ್ತು ನನ್ನ ತನವನ್ನು ತಿನ್ನತೊಡಗಿದೆ.
ಎಲ್ಲಾ ತಪ್ಪುಗಳ ಹಿಂದೊಂದು ಸರಿ ಕಾಣಿಸತೊಡಗಿದೆ.
ಎದುರಲ್ಲಿ ಹುಡುಗಿಯೊಬ್ಬಳು ರೋಡ್ ದಾಟುತ್ತಾ ಎಡವಿ ಬಿದ್ದುಬಿಟ್ಟಳು, ಸೀನ್ ಕಾಣಿಸಿತು ಎಂದು ಖುಷಿಯಾದ ನನಗೆ ಎಮ್.ಜಿ ರೋಡಿನ ಟ್ರಿನಿಟಿ ಸರ್ಕಲ್ ಮುಟ್ಟಿದಾಗ ಮೂಲೆಯಲ್ಲೊಬ್ಬ ಮಲಗಿ ಒದ್ದಾಡುತ್ತಿರುವುದು ಕಾಣಿಸಿತು. ಮುಂದೆ ಹೋದೆ ನೋಡಲು ಕಾರಣ ಅದು ನಮ್ಮ ದೇಶದ ಮಿಲಿಟರಿ ಬಟ್ಟೆಯಂತೆ ಕಾಣಿಸಿತು.
ಅವನೊಳಗೆ ಅವನು ಮೆಲ್ಲಗೆ ಗೊಣಗುತ್ತಿದ್ದ, ಮೈ ಜಾನ ಹೈ, ಐ ವಾನ್ ಸಿ ಮೈ ಮಾಮ್.ಐ ಕಾಂಟ್ ಸ್ಟೇ ಇಯರ್, ಮುಜೆ ಮೆರಾ ಫ್ಯಾಮಿಲಿ ಚಾಯಿಯೆ..
ಒಂದೆ ಸತ್ಯ ಮತ್ತು ಸತ್ವ ಅವನೊಳಗಿತ್ತು ' ಅವನು ನೆಡೆಯಲಾರದಷ್ಟು ಕುಡಿದಿದ್ದ'
ಕುಡಿದು ಬಿದ್ದವನ ಸುತ್ತಾ ನೆರೆದ ಜನರೆಲ್ಲಾ ಆಡಿದ್ದು ಮತ್ತು ಆಡಿಕೊಳ್ಳುತ್ತಿದ್ದು ಒಂದೇ ಮಾತು ' ಮಿಲಿಟರಿಯವರೆ ಇಂಗಾದ್ರೆ'
ತಂಗಾಳಿ ನಿಂತು ಮಳೆ ಸುರಿಯಲಾರಂಬಿಸಿತು, ನೆರೆದವರೆಲ್ಲಾ ಓಡಿ ಹೋಗಿ ಚಾಟು ಸಿಕ್ಕ ಕಡೆ ನಿಂತುಕೊಂಡರು, ಅವನು ಮಳೆಯಲ್ಲಿ ಹಾಗೆ ಬಿದ್ದುಕೊಂಡು ಗೊನಗುತ್ತಿದ್ದ ಆ ಶಬ್ದಗಳು ಯಾರಿಗೂ ಕೇಳಿಸಬಾರದು ಎಂಬ ಫಮರ್ಾನಿನಂತೆ ಪ್ರಕೃತಿ ಟೊಂಕ ಕಟ್ಟಿತ್ತು. ಮನೆ ಹತ್ತಿರವಿದ್ದ ನಾನು ಹೇಗಿದ್ದರು ಮನೆ ಸೇರುತ್ತೇನೆ ಮತ್ತು ಬಟ್ಟೆ ಬದಲಾಯಿಸುತ್ತೇನೆ ಎಂಬ ದೈರ್ಯದೊಂದಿಗೆ ಮಳೆಯಲ್ಲೇ ನೆಡೆದಿದ್ದೆ.

Monday, February 9, 2009

ಎಲ್ಲವು ಮುಗಿದ ಮೇಲೆ

ಎಲ್ಲವೂ ಮುಗಿದ ಮೇಲೆ
ಉಳಿದಿದ್ದೇನು.....?
ಎಲ್ಲವೂ ಪ್ರಾರಂಭವಾಗುವ ಮುನ್ನ
ಇದ್ದದ್ದೇನು....?
ಪ್ರಾರಂಬಿಸುವಾಗ ಜಗತ್ತನ್ನು ಗೆದ್ದುಬಿಡುವಾಸೆ
ಗೆದ್ದುಬಿಟ್ಟಾಗ....
ಗೆದ್ದದ್ದೇಕೆ ಎನ್ನುವ ಯಕ್ಷ ಪ್ರಶ್ನೆ
ಅದಕ್ಕೊಂದೆ ಉತ್ತರ
ಇದು ಜೀವನ ತಮ್ಮ....

Tuesday, January 6, 2009

ಸುಮ್ನೆ ಕೆಲಸವಿಲ್ಲದೆ

ಸೆರೆ ಹಿಡಿಯುವ ಕಣ್ಣು
ಸರಾಯಿ ಕುಡಿಯುವ ಮನಸ್ಸು
ಸಂಸಾರದ ಸಾರ
ಸಾಗರದ ಕಲರವ
ಸಂಗೀತ(ಳ)ದ ಗೀಳು
ಎಲ್ಲಾ ಸೇರಿ ಸಮ್ತಿಂಗ್ ಸಮ್ತಿಂಗ್

ಅವ್ವ ಜೀತ ಮಾಡಲಾರೆ ನಾ.....

ಅವ್ವ ಜೀತ ಮಾಡಲಾರೆ ನಾನು
ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ ಮತ್ತೇ ಈ ತುಂಡು ಬದುಕಿಗೆ...
ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮುಂಚೆ ಕೆಲಸದ ನೆನಪು
ಎಲ್ಲಾದನ್ನು ಅವಸರಸರವಾಗಿ ಮುಗಿಸಿ ಓಡಿದ್ದು ಸಾಕು
ಅವ್ವ ಜೀತ ಮಾಡಲಾರೆ ನಾನು.....
ಈಗೀಗ ಜೀತದ ಗತಿ ಮತ್ತು ಸ್ಥಿತಿ ಬದಲಾಗಿದೆ
ನೀಟಾಗಿರುವ ಅಂಗಿ ಮತ್ತು ಅದಕ್ಕೊಂದು ಟೈ
ಕೈಗೊಂದು ಬ್ಯಾಗು
ಕೃತಕ ನಗು...
ಕೃತಕ ಮರ್ಯಾದೆ....
ದೇಹದ ಸುವಾಸನೆ... ದುರ್ನಾತದ ಮನಸುಗಳು
ಅವ್ವ ಜೀತ ಮಾಡಲಾರೆ ನಾ......